Showing posts with label protected areas. Show all posts
Showing posts with label protected areas. Show all posts

Wednesday, December 14, 2011

In a just society, no justice for wildlife

The art of saving wildlife is a lot more complicated these days than it was earlier, even five years ago. Any move under the banner of wildlife conservation is today vehemently opposed, though not always from genuinely affected groups. Wildlife conservation has little patronage, rather it’s everyone’s whipping boy today. Some politicians have even taken this as a subject to rabble-rouse to gain political mileage.

The Forest Department which is the sole authority to manage and implement law enforcement activities in PAs is already opposed in their day-to-day affairs. In this scenario there are few initiatives that the department or those working on wildlife conservation can propose to implement.

Opposition has several reasons including from those with genuine reasons. However it mainly roots from misinformation and false campaigns. The recent victim is the intention to declare Eco-Sensitive Zones (ESZ) which allows judicious development around PAs. This is mandated to the department under the Environment Protection Act and a recent Supreme Court order. ESZs are to act as cushions to PAs where activities in the immediate vicinity of PAs would be compatible with that of wildlife conservation. These zones are to be delineated based on ecological importance of areas outside the PA boundaries. For instance, ESZ could consist of legally protected or unprotected forests which act as important wildlife corridors connecting other PAs, or villages that lie on the immediate boundaries of PAs.

However rumors have been floated that livelihood practices of communities living on the edge of PAs would be literally halted, obtaining electricity for housing or farming would be prohibited and such other distorted propaganda. If one would look carefully through the guidelines of ESZ it could well be utilized for the benefits of those living on the periphery of the PAs.

The conflict of land acquisition for developmental projects has gained gigantic proportions in the country with several thousand farmers fighting to save their lands each year. ESZ is a tool that could help people to mitigate this, atleast those that adjoin PAs. Setting up heavy industries on the PA boundaries are not favorable to wildlife conservation, neither does farmers want to part with their land for such purposes. Similarly land in critical wildlife corridors could also be protected from unscrupulous land grabbers, exploiters of natural resources and others who have effectively blocked many wildlife corridors in the name of tourism, granite stone quarrying and others. This is evidently seen around Corbett, Bandipur, Panna, BRT Wildlife Sanctuary and many other PAs in the country.

Conservation in practice is more to deal with crises and opportunities. ESZ poses a suitable opportunity for conservationists, whose time is largely swamped with firefighting activities, to take pre-emptive action. Instances of infrastructure, mining and other projects threatening several of our key wildlife habitats are numerous. Corbett, Kanha, Pench, Ranthambhore are all threatened by proposed highways, diamond mining has been a perennial problem for Panna and the list of such predicaments to PAs or critical wildlife corridors are long, eating up critical time and resources of several civil societies. Hence the burden to provide the stimulus should rest on the shoulders of civil societies to make this very important piece of legislation to be implemented and enforced on-ground.

ESZ gives conservationists an opportunity to arrest the loss of habitat connectivity and other insuperable odds that are bid against wildlife conservation. It will help us to have permeable landscapes especially for species that need to move between PAs in search of new territories for survival. Instances of tigers moving distances of nearly 300 kilometers have been recorded from Karnataka. If these connectivity routes are unprotected, as they are today, they would be filled with industries, highways, power projects, gas pipelines and other such developmental activities that may be important for economic prosperity but would act as permanent blocks for certain wildlife species.

In a just society there should be equal opportunity for everyone including non-human life forms. However wildlife conservation does not have a level playing field. It’s further weakened by high levels of political interference and lacks voice in the Government. In totality it’s nobody’s constituency. Those seriously interested in conservation are also minority in voice and gain little mileage with people who could change things on-ground. They are even looked as untouchables from the vast majority, even in the eyes of those who are in the vanguard of environmentalism.

So, it’s time to brace up so that land use around PAs would be in line with wildlife conservation and could directly benefit both wildlife and people.

An edited version of this article was published in Deccan Herald on 14-12-2011

http://www.deccanherald.com/content/211564/in-just-society-no-justice.html


Tuesday, November 22, 2011

ವನ್ಯಜೀವಿ ಸಂರಕ್ಷಣೆಯೆಂಬ ಸೂಕ್ಷ್ಮ ವಲಯ

ನಾಗರಹೊಳೆಯ ಕಾಡಿನ ಬದಿಯಲ್ಲೇ ಕಟ್ಟುತ್ತಿರುವ ಇಂತಹ ಪ್ರವಾಸೋದ್ಯಮ ಉದ್ದಿಮೆಗಳಿಂದ ವನ್ಯಜೀವಿಗಳಿಗಾಗುವ ತೊಂದರೆಗಳನ್ನು ಪರಿಸರ ಸೂಕ್ಷ್ಮವಲಯದ ಘೋಷಣೆಯಿಂದ ತಡೆಯಬಹುದು.

ಇಂದು ವನ್ಯಜೀವಿ ಸಂರಕ್ಷಣೆ ಹಿಂದಿಗಿಂತಲೂ ಬಹು ಕ್ಲಿಷ್ಟ ಮತ್ತು ಸಮಸ್ಯಾತ್ಮಕವಾದ ವಿಚಾರವಾಗಿದೆ. ಹಿಂದೆ ಎಂದರೆ ಕೆಲವೇ ಕೆಲವು ವರ್ಷಗಳ ಮುಂಚೆ ಕೂಡ ಇದು ಇಷ್ಟು ಕಠಿಣವಾಗಿರಲಿಲ್ಲ. ವನ್ಯಜೀವಿ ಸಂರಕ್ಷಣೆಯ ಯಾವುದೇ ಸಣ್ಣ ಪ್ರಸ್ತಾವನೆಗೆ ಕೂಡ ಇಂದು ಉಗ್ರ ವಿರೋಧ ವ್ಯಕ್ತವಾಗುತ್ತದೆ. ಇದಕ್ಕೆ ಹಲವಾರು ಕಾರಣಗಳಿವೆ. ವನ್ಯಜೀವಿಧಾಮ, ರಾಷ್ಟ್ರೀಯ ಉದ್ಯಾನಗಳಿಂದ ಕೆಲವರಿಗೆ ನಿಜವಾಗಿಯೂ ತೊಂದರೆಯಾಗಿರುವುದು ಬಹು ಯುಕ್ತವಾದ ತರ್ಕ. ಆದರೆ ಇಂದು ಹೊಸ ಪ್ರಸ್ತಾವನೆಗಳಿಗೆ ನೈಜವಾಗಿ ಬಾಧಿತರು ವಿರೋಧಿಸುವುದಕ್ಕಿಂತ, ವನ್ಯಜೀವಿಧಾಮಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ಪಟ್ಟಭದ್ರ ಹಿತಾಸಕ್ತಿ ಹೊಂದಿರುವವರು ಹಾಗೂ ಅವರಿಂದ ಪ್ರಚೋದನೆಗೊಂಡವರು ತಡೆಯೊಡ್ಡುವುದು ಹೆಚ್ಚು. ಇದನ್ನು ರಾಜಕೀಯ ಉದ್ದೇಶಗಳಿಗೆ ಉಪಯೋಗ ಪಡಿಸಿಕೊಳ್ಳುವ ನೈಪುಣ್ಯವನ್ನು ಕೂಡ ಕೆಲವರು ಕಂಡುಕೊಂಡಿದ್ದಾರೆ. ಇವರನ್ನು ವಿರೋಧಿಸಲು ವನ್ಯಜೀವಿಗಳಿಗೇನು ಮತ ಹಾಕುವ ಹಕ್ಕಿಲ್ಲವಲ್ಲ. ಇನ್ನು ವನ್ಯಜೀವಿ ಸಂರಕ್ಷಣೆಯಲ್ಲಿ ತೊಡಗಿರುವವರು ಅಲ್ಪಸಂಖ್ಯಾತರು, ಅವರ ಬೇಡಿಕೆಗೆ ಸಕಾರತ್ಮಕ ಮನ್ನಣೆ ಸಿಗುವುದು ಬಹು ವಿರಳ.

ಪರಿಸರಸೂಕ್ಷ್ಮ ವಲಯಗಳು ಕೇಂದ್ರ ಸರ್ಕಾರದ ಪರಿಸರ ಸಂರಕ್ಷಣಾ ಕಾಯಿದೆ ೧೯೮೬ರ ಪ್ರಕಾರ ವನ್ಯಜೀವಿಧಾಮ ಮತ್ತುರಾಷ್ಟ್ರೀಯ ಉದ್ಯಾನಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ವನ್ಯಜೀವಿ ಸಂರಕ್ಷಣೆಗೆ ಪೂರಕವಾದ ಚಟುವಟಿಕೆಗಳನ್ನು ಅನುಷ್ಟಾನಗೊಳಿಸಲು ದೇಶದ ಉಚ್ಛ ನ್ಯಾಯಾಲಯದ ಆದೇಶದ ಮೇರೆಗೆ ಅರಣ್ಯ ಇಲಾಖೆ ಪರಿಸರಸೂಕ್ಷ್ಮ ವಲಯಗಳನ್ನು (ಇಕೋ-ಸೆನ್ಸಿಟಿವ್‌ಜ಼ೊನ್) ಗುರುತಿಸುತ್ತಿದೆ. ಮೂಲ ಯೋಜನೆಯಡಿಯಲ್ಲಿ ಇದು ವನ್ಯಜೀವಿಧಾಮ ಮತ್ತು ರಾಷ್ಟ್ರೀಯ ಉದ್ಯಾನಗಳ ಹತ್ತು ಕಿಲೋಮಿಟರ್ ಸುತ್ತಳತೆಯಲ್ಲಿ ಅನುಷ್ಟಾನಗೊಳಿಸುವ ಯೋಜನೆಯಿತ್ತಾದರೂ ಅದು ಕಾರ್ಯಸಾಧುವಲ್ಲದ ಕಾರಣ ಸ್ಥಾನಿಕವಾಗಿ ಅನುಕೂಲವಾಗುವ ಹಾಗೆ ಗುರುತಿಸುವ ಹಾಗೆ ನಿಯಮಾವಳಿ ಮಾಡಲಾಗಿದೆ.

ಈ ಪರಿಸರಸೂಕ್ಷ್ಮ ವಲಯಗಳಿಂದ ಸ್ಥಳೀಯರ ದಿನನಿತ್ಯದ ಜೀವನಕ್ಕೆ ತೊಡಕಾಗುತ್ತದೆಂಬ ಭಾವನೆಯಿಂದ ಕೆಲವು ಸ್ಥಳಗಳಲ್ಲಿಇದಕ್ಕೆ ಪ್ರತಿಕೂಲ ಅಭಿಪ್ರಾಯ ಮೂಡಿದೆ. ಬಹುಶಃ ಮಾಹಿತಿಯ ಪೂರ್ಣ ಅರಿವಿಲ್ಲದಾಗ ಹೀಗಾಗುವುದು ಸಹಜ. ಪರಿಸರಸೂಕ್ಷ್ಮ ವಲಯಗಳಲ್ಲಿ ಜನರು ಯಾವುದೇ ಕೃಷಿಯನ್ನು ಮುಂದುವರಿಸಲು ಸಾಧ್ಯವಿಲ್ಲ, ಕೃಷಿಗೆ ಬೇಕಾದ ನೀರನ್ನು ಕೊಳವೆಗುಂಡಿಗಳ ಮೂಲಕ ಪಡೆಯಲಾಗುವುದಿಲ್ಲ, ಹಳ್ಳಿಯ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದಿಲ್ಲ, ಮನೆ, ತೋಟಗಳಿಗೆ ವಿದ್ಯುತ್‌ಶಕ್ತಿ ಆಳವಡಿಸಲಾಗುವುದಿಲ್ಲ, ಹೀಗೆ ಹಲವು ಪ್ರಮುಖ ಅಭಿಪ್ರಾಯಗಳ ವದಂತಿ ಹಬ್ಬಿದೆ.

ಇತ್ತೀಚೆಗೆ ಗದಗ ಜಿಲ್ಲೆಯಲ್ಲಿ ರೈತರು ತಮ್ಮ ಬೇಸಾಯದ ಭೂಮಿಯನ್ನು ಉಕ್ಕಿನ ಕಾರ್ಖಾನೆಗೆ ಸ್ವಾಧೀನವಾಗುವುದನ್ನು ತಡೆಯಲು ಹರಸಾಹಸ ಪಡಬೇಕಾಯಿತು. ಆದರೆ ಬಂಡೀಪುರ, ನಾಗರಹೊಳೆ, ಬಿಳಿಗಿರಿರಂಗನಬೆಟ್ಟದಂತಹ ಪ್ರದೇಶದ ಆಸುಪಾಸಿನಲ್ಲಿ ರೈತರ ಭೂಮಿಯನ್ನು ಮುಂದೆ ಸ್ವಾಧೀನ ಪಡಿಸಿಕೊಳ್ಳುವುದು ಸುಲಭವಾಗುವುದಿಲ್ಲ. ಇದಕ್ಕೆ ಮುಖ್ಯವಾದ ಕಾರಣ, ಪರಿಸರಸೂಕ್ಷ್ಮ ವಲಯದ ನಿಯಮ ರೈತರ ಪರವಾಗಿರುವುದು.

ವನ್ಯಜೀವಿಧಾಮದ ಆಸುಪಾಸಿನಲ್ಲಿರುವ ರೈತರು ತಮ್ಮ ಕೃಷಿ ಭೂಮಿಯನ್ನು ಇಂದು ಹಾಗೂ ಮುಂದಿನ ಪೀಳಿಗೆಯವರಿಗೆ ಉಳಿಸಿಕೊಳ್ಳಲು ಪರಿಸರ ಸೂಕ್ಷ್ಮವಲಯಗಳು ಬಹು ಉಪಯೋಗಿ. ಈ ವಲಯಗಳಲ್ಲಿರುವ ಭೂಮಿಯನ್ನು ಯಾವುದೇ ದೊಡ್ಡ ಕಾರ್ಖಾನೆಗಳಿಗಾಗಿ ರೈತರಿಂದ ಸರ್ಕಾರ ಅಥವಾ ಖಾಸಗಿಯವರು ಸ್ವಾಧೀನಪಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ದೇಶದ ಹಲವೆಡೆ ಸರ್ಕಾರ ಮತ್ತು ರೈತರ ನಡುವೆ ಭೂಸ್ವಾಧೀನದ ವಿಚಾರದಲ್ಲಿ ಆಗುವ ಸೆಣೆಸಾಟ, ಕಲಹಗಳಿಗೆ ಪರಿಸರಸೂಕ್ಷ್ಮ ವಲಯಗಳು ತಡೆಯುತ್ತವೆ. ಆದ್ದರಿಂದ ಪರಿಸರಸೂಕ್ಷ್ಮ ವಲಯಗಳನ್ನು ಸ್ಥಳೀಯರು ತಮ್ಮ ಅನುಕೂಲಕ್ಕೆ ಉಪಯೋಗಿ ಪರಿಕರವಾಗಿ ಬಳಸಬಹುದಾಗಿದೆ.

ಹಾಗೆಯೇ ಹಲವು ವನ್ಯಜೀವಿಧಾಮಗಳ ಪಕ್ಕದಲ್ಲಿ ನಡೆಯುತ್ತಿರುವ ಬೆಣಚುಕಲ್ಲು ಗಣಿಗಾರಿಕೆಗಾಗಿ ಉಪಯೋಗಿಸುವ ಸ್ಪೋಟಕಗಳಿಂದ ಹೆಚ್ಚುತ್ತಿರುವ ಮಾನವ-ವನ್ಯಜೀವಿ ಸಂಘರ್ಷವನ್ನು ನಿರ್ವಹಿಸಲು ಕೂಡ ಪರಿಸರ ಸೂಕ್ಷ್ಮ ವಲಯಗಳು ಉಪಯುಕ್ತ. ಆನೆಯಂತಹ ವನ್ಯಜೀವಿಗಳಿಗೆ ಸಿಡಿಮದ್ದಿನ ಸ್ಪೋಟಕಗಳಿಂದಾಗುವ ಗುರುತರ ತೊಂದರೆಗಳು ಆಫ್ರಿಕಾ ದೇಶಗಳಲ್ಲಿ ಅಧ್ಯಯನಗಳಿಂದ ಸಾಬೀತಾಗಿದೆ. ಸ್ಪೋಟಕಗಳಿಂದಾಗಿ ಆನೆ ಹಾಗೂ ಇತರ ವನ್ಯಜೀವಿಗಳಿಂದ ಬೆಳೆ, ಜೀವ ಹಾನಿ ಹಾಗೂ ಇತರ ತೊಂದರೆಗಳು ಹೆಚ್ಚುವ ಸಾಧ್ಯತೆಗಳಿವೆ. ಪರಿಸರಸೂಕ್ಷ್ಮ ವಲಯಗಳಲ್ಲಿ ವನ್ಯಜೀವಿಗಳು ಮತ್ತು ಮಾನವನಿಗೆ ಕಗ್ಗಂಟಾಗಿರುವ ಗಣಿಗಾರಿಕೆಯಂತಹ ಉದ್ಯಮಗಳಿಗೆ ಅವಕಾಶವಿರುವುದಿಲ್ಲ. ಇದು ರೈತರಿಗೆ ಬೆಳೆಹಾನಿಯನ್ನು ಕಡಿಮೆಗೊಳಿಸಲು ಉಪಯೋಗೀ ಸಾಧನವಾಗಬಹುದು.

ನಗರ ಪ್ರದೇಶಗಳಲ್ಲಿ ಸಣ್ಣಪುಟ್ಟ ಕಿರಾಣಿ ಅಂಗಡಿಗಳ ಭವಿಷ್ಯ ದೊಡ್ಡ ವಾಣಿಜ್ಯ ಉದ್ದಿಮೆಗಳಿಂದ ಅಪಾಯದಲ್ಲಿವೆ. ಭವಿಷ್ಯದಲ್ಲಿ ಕೃಷಿಗೆ ಸಹ ಇದೇ ತರಹದ ವಾಣಿಜ್ಯೋದಮಿಗಳು ಹೆಜ್ಜೆ ಇಟ್ಟರೆ ಚಿಕ್ಕ ಹಿಡುವಳಿದಾರರು ಜಮೀನನ್ನು ಅವರಿಗೆ ಬಿಟ್ಟುಕೊಡಬೇಕಾಗುತ್ತದೆ. ಆದ್ದರಿಂದ ಪರಿಸರ ಸೂಕ್ಷ್ಮವಲಯಗಳಲ್ಲಿ ಕೃಷಿ ಭೂಮಿಯನ್ನು ಬೃಹತ್‌ಗಾತ್ರದ ವಾಣಿಜ್ಯ ಕೃಷಿಗೆ ಭೂ ಪರಭಾರಿಕೆ ಮಾಡುವುದನ್ನು ಕೆಲವು ವಲಯಗಳಲ್ಲಿ ತಡೆಹಿಡಿಯಬೇಕೆಂದು ಯೋಜಿಸಲಾಗಿದೆ. ದಕ್ಷಿಣ ಅಮೇರಿಕಾದಲ್ಲಿ ಸೋಯಾ ಬೆಳೆಯಲು, ಇಂಡೊನೇಷ್ಯ, ಮಲೇಷ್ಯದಂತಹ ದಕ್ಷಿಣ ಈಶಾನ್ಯ ದೇಶಗಳಲ್ಲಿ, ತಾಳೆ ಎಣ್ಣೆಯಂತಹ ಏಕಫಸಲಿನ ಕೃಷಿ ಮಾಡಲು ಸ್ಥಳೀಯ ರೈತರು ದೊಡ್ಡ ಉದ್ದಿಮೆದಾರರಿಗೆ ಜಮೀನು ಕಳೆದುಕೊಂಡ ವಿಚಾರ, ವನ್ಯಜೀವಿ ಹಾಗೂ ಕೃಷಿಕರಿಗಿಬ್ಬರಿಗೂ ಇಂದು ಕಷ್ಟದ ಪರಿಸ್ಥಿತಿ ತಂದಿದೆ.

ಪರಿಸರಸೂಕ್ಷ್ಮ ವಲಯದ ಖಾಸಗಿ ಜಮೀನಿನಲ್ಲಿ ಸಹ ಮರ ಕಡಿಯಲಾಗುವುದಿಲ್ಲವೆಂಬ ಅನುಮಾನವಿದೆ. ಆದರೆ ದಿಟವೇನೆಂದರೆ ಕರ್ನಾಟಕ ಅರಣ್ಯ ಕಾಯಿದೆ ೧೯೬೩ ಮತ್ತು ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯಿದೆ ೧೯೭೬ರ ಪ್ರಕಾರ, ಖಾಸಗಿ ಜಮೀನಿನಲ್ಲಿ ನಾಟಾ ತೆಗೆಯಲು ಅವಕಾಶವಿದೆ. ಹಾಗೆಯೇ ಕೊಳವೆಬಾವಿ, ಮನೆ ಅಥವಾ ಕೃಷಿ ಭೂಮಿಗೆ ವಿದ್ಯುತ್ಶ್‌ಕ್ತಿ, ಹಳ್ಳಿಯ ರಸ್ತೆಯನ್ನು ಸರಿಪಡಿಸುವುದಕ್ಕೆ ಯಾವುದೇ ಕಾನೂನು ಅಡೆತಡೆಗಳಿರುವುದಿಲ್ಲ. ಆದರೆ ಪರಿಸರಸೂಕ್ಷ್ಮ ವಲಯದಲ್ಲಿ ದೊಡ್ಡ ಉದ್ದಿಮೆದಾರರು ಅಲ್ಲಿರುವ ಕೊಳವೆಬಾವಿಗಳಿಂದ ನೀರು ತೆಗೆದು ಸೀಸೆಯಲ್ಲಿ ತುಂಬಿ ಮಾರುವ ಘಟಕಗಳಿಗೆ (ಮಿನರಲ್ ವಾಟರ್ ಅಥವಾ ಸೋಡ ಪೇಯದಂತಹ ಘಟಕಗಳು) ನೀತಿ, ನಿಯಮಗಳ ತೊಡಕಾಗುತ್ತದೆ. ಇದು ಬಹುಶಃ ಉತ್ತಮವಾದ ಹೆಜ್ಜೆ, ಇಲ್ಲವಾದಲ್ಲಿ ಸ್ಥಳೀಯ ಕೃಷಿಕರ ಬಾವಿ, ಕೊಳವೆಬಾವಿಗಳೆಲ್ಲ ಕೆಲವೇ ಕೆಲವರ ಲಾಭಕ್ಕಾಗಿ ಬತ್ತಿ ಹೋಗುತ್ತವೆ. ಕೇರಳದಲ್ಲಿ ಇಂತಹ ಕೆಲವು ಬಹುರಾಷ್ಟ್ರೀಯ ಉದ್ಯಮಗಳ ವಿರುದ್ಧ ಹಲವಾರು ಗ್ರಾಮ ಪಂಚಾಯಿತಿಗಳು ಹೋರಾಡುತ್ತಿವೆ.

ಪರಿಸರಸೂಕ್ಷ್ಮ ವಲಯದಲ್ಲಿ ಸ್ಥಳೀಯರ ಯಾವುದೇ ಜೀವನೋಪಾಯದ ವಿಚಾರವಾಗಿ ಅಡ್ಡಿಯಾಗದು. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಕೂಡ ಸ್ಪಷ್ಟೀಕರಣ ನೀಡಿದೆ. ಕಾನೂನಿನ ತೊಡಕಾಗುವುದು ವನ್ಯಜೀವಿಗಳಿಗೆ ಹಾನಿಕರವಾದ ಹೊಸ ರೆಸಾರ್ಟ್ ಯೋಜನೆಗಳು, ವನ್ಯಜೀವಿಧಾಮಗಳ ಬದಿಯಲ್ಲಿಯೇ ಗಣಿಗಾರಿಕೆ, ಬೃಹತ್ ಕೈಗಾರಿಕೆಗಳು, ಕಾಡು ಮತ್ತು ಜನವಸತಿ ಪ್ರದೇಶಗಳ ಮುಳುಗಡೆಗೆ ಅವಕಾಶವಾಗುವ ನೀರಾವರಿ ಯೋಜನೆಗಳು, ಆನೆಯಂತಹ ದೊಡ್ಡ ಪ್ರಾಣಿಗಳ ವಲಸೆಗೆ ಅಡ್ಡಿಯಾಗುವಂತಹ ಯೋಜನೆಗಳಿಗೆ ಮಾತ್ರ.

ಬಹು ಮುಖ್ಯವಾಗಿ ಕರಡು ಪ್ರಕಟಣೆಗೆ ಸ್ಥಳೀಯರು ತಮ್ಮ ಅಭಿಪ್ರಾಯ, ಆಕ್ಷೇಪಣೆಗಳನ್ನು ನೇರವಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬಹುದಾಗಿದೆ. ಸರ್ಕಾರಕ್ಕೆ ಬಂದ ಎಲ್ಲಾ ಆಕ್ಷೇಪಣೆಗಳನ್ನು ಗಮನಕ್ಕೆ ತೆಗೆದುಕೂಂಡು ಸೂಕ್ತ ಪರಿಹಾರದ ನಂತರವೇ ಅಂತಿಮ ಅಧಿಸೂಚನೆ ಹೊರಡಿಸುವುದಕ್ಕೆ ಸಾಧ್ಯ. ಹಾಗಾಗಿ ಕರಡು ಪ್ರಕಟಣೆಗೆ ವಿರೋಧಿಸುವ ಬದಲು ಸ್ಥಳೀಯರೇ ತಮಗೆ ಬೇಕಾದ ಅಥವಾ ಬೇಡವಾದ ವಿಚಾರಗಳನ್ನು ಬರವಣಿಗೆಯಲ್ಲಿ ವ್ಯಕ್ತಪಡಿಸುವುದು ಅತೀ ಸೂಕ್ತವೆನಿಸುತ್ತದೆ.

ಇಲ್ಲವಾದಲ್ಲಿ ಕೆಲವೇ ಕೆಲವರ ವದಂತಿಗಳಿಗೆ ಜನರು ಬಲಿಪಶುವಾಗಬೇಕಾಗುತ್ತದೆ. ಉದಾಹರಣೆಗೆ ಬಂಡೀಪುರದ ಸುತ್ತಮುತ್ತಲಿನ ಪ್ರದೇಶದ ಜನರಿಗೆ ತಪ್ಪುದಾರಿಗೆಳೆಯುತ್ತಿರುವಲ್ಲಿ, ರೆಸಾರ್ಟ್ ನಿರ್ಮಾಣ ಮತ್ತು ವಿಹಾರಧಾಮಗಳಿಗೆ ಜಮೀನು ಕೊಡಿಸುವ ದಲ್ಲಾಳಿಯೊಬ್ಬರು ಪ್ರಮುಖ ಪಾತ್ರವಹಿಸಿರುವುದು ಗಮನಿಸಿದರೆ ಅವರು ವಿರೋಧಿಸುತ್ತಿರುವ ಕುಚೋದ್ಯ ಅರ್ಥವಾಗುತ್ತದೆ. ಅವರೊಡನೆ ಹುಲಿ ಚರ್ಮ ಮಾರಾಟ ಮಾಡಲು ಹೋಗಿ ಸಿಕ್ಕಿಬಿದ್ದು ನ್ಯಾಯಾಲಯ ಅಲೆಯುತ್ತಿರುವ ವ್ಯಕ್ತಿಯೊಬ್ಬರು ಕೂಡಾ ಸೇರಿರುವುದು ನೋಡಿದರೆ ಇವರ ಹೋರಾಟದ ಹಿಂದಿನ ಮರ್ಮ ಅರ್ಥವಾಗುತ್ತದೆ.

ನಾವೆಲ್ಲರೂ ವನ್ಯಜೀವಿ ಸಂರಕ್ಷಣೆಯನ್ನು ನೋಡುವ ದೃಷ್ಟಿಕೋನ ಬೇರೆಯಿರುತ್ತದೆ. ದೂರದ ಊರಿನಲ್ಲಿರುವ ನನ್ನಂತಹ ವನ್ಯಜೀವಿ ಸಂರಕ್ಷಕರಿಗೆ ಹುಲಿ, ಆನೆ, ಚಿರತೆ, ಕಾಟಿ, ಇನ್ನಿತರ ಪ್ರಾಣಿ, ಪಕ್ಷಿಗಳು ಉಳಿವನ್ನು ನಮ್ಮ ನಿರ್ದಿಷ್ಟ ಕೋನದಿಂದ ನೋಡುತ್ತೇವೆ. ವನ್ಯಜೀವಿ ಸಂರಕ್ಷಣೆಯಿಂದ ಬಾಧಿತರಾದವರು ಇದೇ ವಿಷಯವನ್ನು ಅವರದೇ ಮನೋಭಾವದಿಂದ ನೋಡುತ್ತಾರೆ. ಆದರೆ ವನ್ಯಜೀವಿ, ಕಾಡನ್ನು ಸಂರಕ್ಷಿಸಿ ಆಗುವ ಉಪಯೋಗಗಳು ಬಹುಶಃ ಪ್ರವಾಸೋದ್ಯಮದ ಮೂಲಕ ಸ್ಥಳೀಯರಿಗೊದಗುವ ಕೆಲವು ಕೆಲಸಗಳನ್ನು ಹೊರತುಪಡಿಸಿ ಇನ್ನ್ಯಾವುದೇ ಲಾಭವು ಕಾಣುವುದಿಲ್ಲ. ಆದರೆ ಅದರಿಂದಇರುವ ಪರೋಕ್ಷವಾದ ಪ್ರಯೋಜನಗಳು ಹಲವಾರು, ಅದಕ್ಕಾಗಿಯಾದರೂ ನಾವು ಪರಿಸರಸೂಕ್ಷ್ಮ ವಲಯಗಳನ್ನು ಬೆಂಬಲಿಸಬೇಕಾಗುತ್ತದೆ. ಇದರ ಸಾರ್ಥಕತೆ ನಮಗಲ್ಲದಿದ್ದರೂ ನಮ್ಮ ಮುಂದಿನ ಪೀಳಿಗೆಯವರಿಗಾದರೂ ಒಳಿತಾಗುತ್ತದೆ.

ಈ ಲೇಖನದ ಪರಿಷ್ಕೃತ ಆವೃತ್ತಿ ದಿನಾಂಕ ೨೨-೧೧-೨೦೧೧ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.
http://www.prajavani.net/web/include/story.php?news=2730&section=30&menuid=14

Wednesday, October 5, 2011

ವನ್ಯಜೀವಿಧಾಮವೆಂಬುದು ಪೆಡಂಭೂತವೇ?

ಪುಷ್ಪಗಿರಿ ವನ್ಯಜೀವಿಧಾಮದ ಶೋಲಾ ಮತ್ತು ಹುಲ್ಲುಗಾವಲುಗಳು- ©ಪಿ.ಎಂ.ಮುತ್ತಣ್ಣ

ವನ್ಯಜೀವಿಧಾಮ, ರಾಷ್ಟ್ರೀಯ ಉದ್ಯಾನವೆಂದರೆ ಜನರನ್ನು ಒಕ್ಕಲೆಬ್ಬಿಸುವ ಯೋಜನೆಗಳೆಂದೇ ತಿಳಿವು, ಅಭಿಪ್ರಾಯಗಳಿವೆ. ೭೦ರ ದಶಕದಲ್ಲಿ ರಾಷ್ಟ್ರೀಯ ಉದ್ಯಾನಗಳ ಸ್ಥಾಪನೆಗೆ ಕೆಲವು ಪ್ರದೇಶಗಳಲ್ಲಿ ಜನರನ್ನು ಒಕ್ಕಲೆಬ್ಬಿಸಿದ ರೀತಿ ಅಮಾನವೀಯ. ಪ್ರಕ್ರಿಯೆ ದೇಶದೆಲ್ಲೆಡೆ ವನ್ಯಜೀವಿಧಾಮ, ರಾಷ್ಟ್ರೀಯ ಉದ್ಯಾನಗಳೆಂದರೆ ಜನರು ಭೀತಿ ಪಡುವ ಪರಿಸ್ಥಿತಿ ತಂದೊಡ್ಡಿದೆ. ಆಗ ನಡೆದ ಕೃತ್ಯದಿಂದ ಜನರು ವನ್ಯಜೀವಿ ಸಂರಕ್ಷಣೆಯ ಬಗ್ಗೆ ಅನುಮಾನದಿಂದ ನೋಡುವುದು ಸರಿಯಷ್ಟೇ. ಆದರೆ ಕಾಲ, ಕಾನೂನು ಹಾಗೂ ಮುಖ್ಯವಾಗಿ ಸಾರ್ವಜನಿಕರು ಹಕ್ಕುಗಳಿಗೆ ಹೋರಾಡುವ ರೀತಿಗಳು ಬದಲಾಗಿವೆ.

ಈಗ ರಾಷ್ಟ್ರೀಯ ಉದ್ಯಾನ ಅಥವಾ ವನ್ಯಜೀವಿಧಾಮಗಳನ್ನು ಘೋಷಿಸಿದರೆ ಅಲ್ಲಿನ ಹಳ್ಳಿಗಳು, ಜನರ ಭೂಮಿ, ಬೆಟ್ಟ, ಹಕ್ಕಲು ಮುಂತಾದ ಪ್ರದೇಶಗಳ ಮೇಲೆ ಜನರ ಹಕ್ಕು ಮುಂದುವರಿಯುತ್ತದೆ. ಇದನ್ನು ಘೋಷಣೆಯ ಪತ್ರದಲ್ಲಿ ಅಧಿಕೃತವಾಗಿ ಕೂಡ ನಮೂದಿಸಲಾಗುತ್ತದೆ. ಹಾಗೆಯೇ ಪರಂಪರಾಗತವಾಗಿ ನೆಲೆಸಿರುವ ಸ್ಥಳೀಯರು ಮತ್ತು ಗಿರಿಜನರಿಗೆ ತಮ್ಮ ಸಾಂಪ್ರದಾಯಿಕ ಹಕ್ಕುಗಳು ಅನುಸೂಚಿತ ಬುಡಕಟ್ಟುಗಳ ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳ ಅಧಿನಿಯಮ ಕಾಯ್ದೆಯಡಿಯಲ್ಲಿ ಮುಂದುವರಿಯುತ್ತವೆ.

ಹೌದು, ಕೆಲವರಿಗೆ ವನ್ಯಜೀವಿಧಾಮಗಳಿಂದ ತೊಡಕಾಗುತ್ತದೆ. ಬಿಗಿ ಕಾನೂನಿನಿಂದ ವನ್ಯಜೀವಿ ಬೇಟೆ, ಕಳ್ಳ ನಾಟಾ ಮತ್ತು ರೈತರ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಯೋಜಿಸಿರುವ ಉದ್ದಿಮೆದಾರರು, ಪರರಾಜ್ಯಗಳಿಂದ ಬಂದು ರಬ್ಬರ್ ತೋಟಗಳಿಗಾಗಿ ಕಾಡನ್ನು ಒತ್ತುವರಿ ಮಾಡುವವರಿಗೆ ಅಡತಡೆಯಾಗುತ್ತದೆ.

ಬೇಟೆಯಾಡುವುದು ಕೂಡ ನಮ್ಮ ಸಾಂಪ್ರದಾಯಿಕ ಹಕ್ಕು ಎಂದು ಪ್ರತಿಪಾದಿಸುವವರಿದ್ದಾರೆ. ಆದರೆ ಕೆಲವು ಸಾಂಪ್ರದಾಯಿಕ ರೀತಿ, ನೀತಿ ಕಾಲಕ್ಕೆ ತಕ್ಕ ಹಾಗೆ ಬದಲಾಗಬೇಕಾಗುತ್ತದೆ. ಸತಿ ಪದ್ಧತಿ, ಬಾಲ್ಯ ವಿವಾಹ ಇನ್ನಿತರ ಹಲವಾರು ವಿಚಾರಗಳು ನಮ್ಮ ಸಾಂಪ್ರದಾಯಿಕ ರೀತಿ ರಿವಾಜುಗಳೇ ಆಗಿದ್ದವು. ಆದರೆ ಅವುಗಳನ್ನು ನಾವು ಮುಂದುವರಿಸಿಕೊಂಡು ಹೋಗಬೇಕೇ?

ಹಾಗೆಯೇ ಸಮಾಜದ ಬೆಳವಣಿಗೆಗೆ ಅಭಿವೃದ್ಧಿ ಕೂಡ ಬಹು ಮುಖ್ಯ ಅಂಗ. ಆದರೆ, ಕೆಲವು ಪ್ರದೇಶಗಳಿಂದ ಕಾರ್ಖಾನೆ, ದೊಡ್ಡ ಯೋಜನೆಗಳನ್ನು ದೂರವಿಡುವುದೇ ಒಳಿತು. ಉದ್ದಿಮೆಗಳ ಹೆಸರಿನಲ್ಲಿ ನಮ್ಮಲ್ಲಿರುವ ಕಾಡು, ನದಿಗಳನ್ನು ಕಳೆದುಕೊಳ್ಳುವುದು ಸಮೀಪ ದೃಷ್ಟಿಯ ಅಭಿವೃದ್ಧಿಯಾಗುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯ ಗೊಂದಲ

ಇಂದು ಭೂಮಿಯೆನ್ನುವುದು ಅತೀ ಬೆಲೆಯುಳ್ಳ ಪದಾರ್ಥವಾಗಿದೆ. ಖಾಸಗಿ ಉದ್ದಿಮೆದಾರರು ಬೃಹತ್ ಕಾರ್ಖಾನೆಗಳ ಸ್ಥಾಪನೆಗೆ ಸ್ವಾಧೀನ ಪಡಿಸಿಕೊಳ್ಳುತ್ತಿರುವುದು ರೈತರ ಕೃಷಿಭೂಮಿಯನ್ನೇ. ಶಿರಾಡಿ, ಸುಬ್ರಹ್ಮಣ್ಯ, ಚಾರ್ಮಾಡಿ ಪ್ರದೇಶಗಳಲ್ಲಿ ಇಲ್ಲಿಯವರೆಗೆ ಅಳವಡಿಸಿರುವ ಯೋಜನೆಗಳಿಗೆ ಹೆಚ್ಚಾಗಿ ಸರ್ಕಾರಿ, ಅದರಲ್ಲೂ ಅರಣ್ಯ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಇನ್ನು ಮುಂದೆ ಬರುವ ಹಲವು ಯೋಜನೆಗಳನ್ನು ರೈತರ ಭೂಮಿಗಳಲ್ಲಿ ಅಳವಡಿಸುವ ವಿಚಾರದಲ್ಲಿ ಅನುಮಾನವೇ ಇಲ್ಲ. ಈಗಾಗಲೇ ಅನಿಲ ಕೊಳವೆಗಾಗಿ ಭೂಸ್ವಾಧೀನದ ವಿಚಾರ ಎಲ್ಲರಿಗೂ ತಿಳಿದಿರುವ ವಿಷಯವೇ.

ರೈತರ ಕೃಷಿಭೂಮಿಯನ್ನು ಸ್ವಾಧೀನ ಪಡಿಸುವುಕೊಳ್ಳುವುದಕ್ಕೆ ಹಲವಾರು ವಾಣಿಜ್ಯೋದ್ಯಮಿಗಳು ಹಾತೊರೆಯುತ್ತಿದ್ದಾರೆ. ಅಣ್ಣಾ ಹಜಾರೆಯವರಂತಹ ಪ್ರತಿಭಟನೆಗಳನ್ನು ನಡೆಸಿ ಸರ್ಕಾರದ ಗಮನ ಸೆಳೆಯುವುದು ಪ್ರತಿಬಾರಿಯು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಹಲವಾರು ಯೋಜನೆಗಳಿಗೆ ಭೂಸ್ವಾಧೀನದ ಪ್ರಕ್ರಿಯೆ ಪ್ರಾರಂಭವಾಗಬಹುದು. ಅರಣ್ಯ ಮತ್ತು ಕೃಷಿ ಭೂಮಿಯನ್ನು ಕಳೆದುಕೊಂಡರೆ ಆಗುವ ನೇರ ಮತ್ತು ಪರೋಕ್ಷ ಪರಿಣಾಮಗಳು ಹಲವಾರು.

ಗಾಳಿಯ ಹಾಗೆ ನೀರು ಸಹ ಮನುಷ್ಯ, ಪ್ರಾಣಿಗಳೆಲ್ಲರಿಗೂ ಅತೀ ಮುಖ್ಯವಾದ ಪದಾರ್ಥ. ದಕ್ಷಿಣ ಕನ್ನಡ ಜಿಲ್ಲೆಗೆ ನೀರು ತರುವ ನೇತ್ರಾವತಿ, ಕುಮಾರಧಾರ ಮತ್ತು ಅವುಗಳ ಉಪನದಿಗಳ ಅಡ್ಡವಾಗಿ ೪೪ ಕಿರು ಜಲವಿದ್ಯುತ್ (ಮಿನಿ-ಹೈಡಲ್) ಯೋಜನೆಗಳನ್ನು ಯೋಜಿಸಲಾಗಿದೆ. ಎಲ್ಲಾ ವಿದ್ಯುತ್ ಯೋಜನೆಗಳು ಕಾರ್ಯಗತಗೊಂಡರೆ ದಕ್ಷಿಣ ಕನ್ನಡ ಜಿಲ್ಲೆಗೆ ನದಿ, ತೊರೆಗಳಿಂದ ಒಂದು ಹನಿ ನೀರು ಸಿಗುವುದು ಅನುಮಾನ. ಅದರಲ್ಲೂ ಬೇಸಿಗೆಯಲ್ಲಿ ೪೪ ಅಣೆಕಟ್ಟುಗಳಿರುವ ನದಿಯಿಂದ ನೀರನ್ನು ಪ್ರತೀಕ್ಷಿಸುವುದು ಸಾಧ್ಯವೇ ಇಲ್ಲ. ಧರ್ಮಸ್ಥಳದಂತಹ ಧಾರ್ಮಿಕ ಸ್ಥಳಗಳ ಮೂಲಕ ಹರಿಯುವ ನೇತ್ರಾವತಿ ಇಂಗುವುದಂತೂ ನಿಜ.

ಈಗಾಗಲೇ ಹಾಸನ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿರುವ ಕಿರು ಜಲವಿದ್ಯುತ್ ಯೋಜನೆಗಳಿಂದಾದ ಅರಣ್ಯ ನಾಶ ಹಾಗೂ ಅಣೆಕಟ್ಟು, ಸುರಂಗ, ಇನ್ನಿತರ ಕಾಮಗಾರಿಗಳ ಪರಿಣಾಮದಿಂದ ಆನೆಗಳು ಸ್ಥಳೀಯ ರೈತರ ಕೃಷಿಭೂಮಿಗೆ ಲಗ್ಗೆಯಿಡುವುದು ಅತೀ ಹೆಚ್ಚಾಗಿದೆ. ವನ್ಯಜೀವಿಧಾಮದ ಲಾಭಗಳನ್ನರಿತ ಕೃಷಿಕರು ತಮ್ಮ ಭೂಮಿಯನ್ನು ಸರ್ಕಾರವೇ ವನ್ಯಜೀವಿ ಸಂರಕ್ಷಣೆಗಾಗಿ ಸ್ವಾಧೀನಪಡಿಸಿಕೊಳ್ಳಬೇಕೆಂದು ಯಾಚಿಸಿದ್ದಾರೆ.

ಘಟ್ಟದಲ್ಲಿ ಹುಟ್ಟುವ ನೇತ್ರಾವತಿ ನದಿಯನ್ನು ಬಯಲು ಪ್ರದೇಶಕ್ಕೆ ತಿರುಗಿಸುವ ಪ್ರಯತ್ನವು ಹಲವು ವರ್ಷಗಳಿಂದ ಚರ್ಚೆಯಲ್ಲಿದೆ. ಯೋಜನೆ ಅನುಷ್ಠಾನಗೊಂಡರೆ ಕಾಲುವೆ ಮತ್ತು ಅಣೆಕಟ್ಟುಗಳಿಗಾಗಿ ಹಲವಾರು ರೈತರು ತಮ್ಮ ಜಮೀನನ್ನು ಬಿಟ್ಟುಕೊಡಬೇಕಾಗುತ್ತದೆ. ನೇತ್ರಾವತಿ ತಿರುವು ಯೋಜನೆ ಘಟ್ಟದ ಮೇಲೆ ಅನುಷ್ಠಾನಗೊಂಡರೂ ಅದರ ನೇರ ದುಷ್ಪರಿಣಾಮವಾಗುವುದು ಅದರ ಮೇಲೆ ಅವಲಂಬಿತವಾಗಿರುವ ಘಟ್ಟದ ಕೆಳಗಿನ ರೈತರು ಮತ್ತು ಕುಡಿಯುವ ನೀರಿಗಾಗಿ ನದಿ ನೀರನ್ನೇ ನಂಬಿರುವ ಜನಸಮಾನ್ಯರ ಮೇಲೆ.

ಭೂಸ್ವಾಧೀನ ಪ್ರಕ್ರಿಯೆಯನ್ನು ಕಾನೂನಿನಡಿಯಲ್ಲಿ ತಡೆಯಬೇಕೆಂದರೆ ಈಗಿರುವ ಕೆಲವು ರಕ್ಷಿತಾರಣ್ಯಗಳನ್ನು ವನ್ಯಜೀವಿಧಾಮದ ಭಾಗವಾಗಿ ಪರಿವರ್ತನೆಗೊಳಿಸುವುದು. ವನ್ಯಜೀವಿಧಾಮಗಳಲ್ಲಿ ಜನರ ದಿನನಿತ್ಯದ ಜೀವನಕ್ಕೆ ತೊಂದರೆಯಾಗದಿದ್ದರೂ ಅನಿಲ ಕೊಳವೆ, ದೊಡ್ಡ ಪ್ರಮಾಣದ ವಿದ್ಯುತ್ ಪ್ರಸರಣದ ತಂತಿಗಳು, ಗುಂಡ್ಯದಂತಹ ಬೃಹತ್ ಜಲವಿದ್ಯುತ್ ಯೋಜನೆ, ನೇತ್ರಾವತಿ ತಿರುವು ಯೋಜನೆ ಹೀಗೆ ಹಲವು ಯೋಜನೆಗಳಿಗೆ ಕಾನೂನಿನಡಿಯಲ್ಲಿ ಭೂಸ್ವಾಧೀನ ಪಡಿಸಿಕೊಳ್ಳುವುದು ಕಷ್ಟಸಾಧ್ಯ. ವನ್ಯಜೀವಿಧಾಮದ ವಿರುದ್ಧ ದನಿಯೆತ್ತಿರುವ ಹಲವು ವ್ಯಕ್ತಿಗಳು ಅನಿಲ ಕೊಳವೆ, ಕಿರುಜಲವಿದ್ಯುತ್ ಯೋಜನೆ, ಗುಂಡ್ಯ ಜಲವಿದ್ಯುತ್ ಯೋಜನೆಗಳಿಗಾಗಿ ರೈತರ ಜಮೀನು ಸ್ವಾಧೀನವಾಗುವ ಪರಿಸ್ಥಿತಿಯಿದ್ದರೂ ಅದರ ವಿರುದ್ಧ ದನಿಯೆತ್ತದಿರುವುದು ಆಶ್ಚರ್ಯ.

ಇಲ್ಲಿನ ಕೆಲವು ರಕ್ಷಿತಾರಣ್ಯಗಳು ವನ್ಯಜೀವಿಧಾಮವಾದರೆ ಮುಂಬರುವ ದಿನಗಳಲ್ಲಿ ಬೃಹತ್ ಉದ್ದಿಮೆಗಳಿಗೆ, ಖಾಸಗಿ ಜಲವಿದ್ಯುತ್ ಯೋಜನೆಗಳಿಗೆ ಅನುಮತಿ ನೀಡಲಾಗುವುದಿಲ್ಲವೆಂಬ ಅಳುಕು ಕೆಲವು ಅಧಿಕಾರಿಗಳಿಗಿರಬಹುದೇ?

ಹುಲಿ, ಆನೆಗಳನ್ನು ತಂದು ಬಿಡುವರೆ?

ಅರಣ್ಯ ಪ್ರದೇಶಗಳನ್ನು ವನ್ಯಜೀವಿಧಾಮಗಳನ್ನಾಗಿ ಮಾಡಿದರೆ ಅಲ್ಲಿ ಹುಲಿ, ಆನೆಗಳನ್ನು ಬೇರೆಡೆಯಿಂದ ತಂದು ಬಿಡಲಾಗುತ್ತದೆಯೆಂಬುದು ವಿಚಾರ ವಾಸ್ತವಕ್ಕೆ ಬಹು ದೂರ. ಊರಿಗೆ ವನ್ಯಜೀವಿಗಳು ಪ್ರವೇಶಿಸಿದರೆ ಅವುಗಳನ್ನು ಹಿಡಿದು ಕಾಡಿಗೆ ಬಿಡುವ ಸಂದರ್ಭಗಳಿರುವುದು ಹಲವು. ವನ್ಯಜೀವಿಧಾಮವೆಂದು ಘೋಷಣೆಯಾದೊಡನೆ, ಅಲ್ಲಿಗೆ ಇತರ ಪ್ರದೇಶಗಳಿಂದ ವನ್ಯಜೀವಿಗಳನ್ನು ತಂದು ಬಿಡುವ ಪದ್ಧತಿ ನಮ್ಮ ದೇಶದಲ್ಲಿಲ್ಲ, ಅದು ವೈಜ್ಞಾನಿಕವೂ ಅಲ್ಲ. ಮುಗ್ಧ ಜನರಿಗೆ ತಪ್ಪು ಮಾಹಿತಿ ನೀಡಿ ಅವರನ್ನು ಗೊಂದಲಗೊಳಿಸುವುದು ಸುಲಭದ ವಿಚಾರ ಮತ್ತು ಕೆಲವರಿಗೆ ಅದರಿಂದ ಲಾಭವಾಗುವುದು ಕೂಡ ಸತ್ಯ.

ಹಾಗೆಯೇ ನಿಮ್ಮ ಹಳ್ಳಿ ವನ್ಯಜೀವಿಧಾಮದೊಳಗೆ ಸೇರಿಸಲಾಗುತ್ತದೆಯೆಂದು ಹಾರುಸುದ್ದಿ ಹಬ್ಬಿಸಿ ಜನರಲ್ಲಿ ಕಸಿವಿಸಿ ಉಂಟಾಗುವುಂತೆ ಮಾಡುವುದು ಸೂಕ್ತವಲ್ಲ. ಕುಂಬಾರು, ಹರಿಹರಪಲ್ಲದಡ್ಕ, ಬಿಳಿನೆಲೆ, ಸಿರಿಬಾಗಿಲು, ನೆರಿಯ, ನಿಡ್ಲೆ, ಅರಿಸಿನಮಕ್ಕಿ, ಸುಬ್ರಹ್ಮಣ್ಯ, ಕಲ್ಮಕಾರು, ಶಿಶಿಲ ಹೀಗೆ ಹಲವಾರು ಊರಿಗಳಿಗೂ ಪ್ರಸ್ತಾಪಿಸಿದ ವನ್ಯಜೀವಿಧಾಮಕ್ಕೂ ಏನೂ ಸಂಬಂಧವಿಲ್ಲದಿದ್ದರೂ ಅಲ್ಲಿನ ಜನರನ್ನು ಸಂದಿಗ್ಧತೆಯಲ್ಲಿ ಸಿಲುಕುವಂತೆ ಸುದ್ದಿ ಹರಡಿಸಲಾಗಿದೆ. ಇದರಲ್ಲಿ ಕೆಲವು ಹಳ್ಳಿಗಳಂತೂ ಪ್ರಸ್ತಾಪಿಸಿರುವ ವನ್ಯಜೀವಿಧಾಮದಿಂದ ಹಲವು ಕಿಲೋಮಿಟರ್ ದೂರದಲ್ಲಿದೆ.

ಆದರೆ ಒಂದು ಮಾತಂತೂ ನಿಜ. ಪುಷ್ಪಗಿರಿ ವನ್ಯಜೀವಿಧಾಮಕ್ಕೆ ಕೆಲವು ರಕ್ಷಿತಾರಣ್ಯಗಳನ್ನು ಸೇರಿಸುವ ಪ್ರಸ್ತಾವನೆಗೆ ಸರ್ಕಾರವಿನ್ನೂ ಅನುಮೋದನೆ ನೀಡಿಲ್ಲ. ವನ್ಯಜೀವಿಧಾಮವಾದರೆ ಜನರಿಗಿರುವ ನೀರು, ಕೃಷಿಭೂಮಿಯ ಉಳಿವು ಹೀಗೆ ನೇರ ಮತ್ತು ಪರೋಕ್ಷ ಪ್ರಯೋಜನಗಳು ಹಲವು. ಒಳಿತುಗಳು ಈಗಿನ ಜನ ಹಾಗೂ ಅವರ ಮುಂದಿನ ಪೀಳಿಗೆಯವರಿಗೆ ಬೇಕು ಅಥವಾ ಬೇಡವೆನ್ನುವ ನಿರ್ಧಾರವನ್ನು ತೆಗೆದುಕೂಳ್ಳುವುದು ಅವರ ಅಧೀನದಲ್ಲಿದೆ. ಸರ್ಕಾರಕ್ಕೆ ಯಾರು ಏನೇ ಸಲಹೆ ಕೊಟ್ಟರೂ ಸಾರ್ವಜನಿಕರು ತಮ್ಮ ಪಾರಿಸರಿಕ ಭವಿಷ್ಯವನ್ನು ತಾವೇ ನಿರ್ಧರಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಜವಾಗಿ ವನ್ಯಜೀವಿಧಾಮದೊಳಗೆ ಬರುವ ಜನರು ವಿರೋಧಿಸಿದರೆ ಸರ್ಕಾರವು ಪ್ರದೇಶಗಳನ್ನು ಹೊರತುಪಡಿಸಿ ವನ್ಯಜೀವಿಧಾಮವನ್ನು ಘೋಷಿಸಬಹುದು. ಆದರೆ ಮುಂಬರುವ ದಿನಗಳಲ್ಲಿ ಜಲ, ನೆಲದ ರಕ್ಷಣೆಗೆ ಯಾವುದೇ ಕಟ್ಟು ನಿಟ್ಟಿನ ಕಾನೂನಿನ ರಕ್ಷಣೆ ಸಿಗುವುದು ಅನುಮಾನ.

ಈ ಲೇಖನದ ಪರಿಷ್ಕೃತ ಆವೃತ್ತಿ ದಿನಾಂಕ ೦೧-೧೦-೨೦೧೧ರಂದು ಉದಯವಾಣಿ ಪತ್ರಿಕೆಯಲ್ಲಿ ಪ್ರಕಟಿತವಾಗಿತ್ತು.